ನ್ಯಾಯಾಲಯದ ನೋಟೀಸ್ ನೀಡಲು ಬಂದ ಪೊಲೀಸರೊಂದಿಗೆ ಮಾಜಿ ಶಾಸಕ ಕಾಶಪ್ಪನವರ್ ಕಿರಿಕ್

ಬಾಗಲಕೋಟೆ : ಮನೆಯಲ್ಲಿ ಜಗಳವಾಗುತ್ತಿದೆ ಎಂಬ ಅಕ್ಕಪಕ್ಕದವರ ದೂರವಾಣಿ ಕರೆ ಹಾಗೂ ಹೈಕೋರ್ಟ್ ನೋಟೀಸ್ ತಲುಪಿಸಲು ಹೋದ ಪೊಲೀಸರೊಂದಿಗೆ ಹುನಗುಂದ ಮಾಜಿ ಶಾಸಕ ವಾಗ್ವಾದ ನಡೆಸಿರುವ ಘಟನೆ ಇಳಕಲ್ ನಗರದಲ್ಲಿ ನಡೆದಿದೆ.
ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಪತ್ನಿ ವೀಣಾ ಕಾಶಪ್ಪನವರ್ ಮಧ್ಯೆ ಗಲಾಟೆಯಾಗಿದೆ, ಎಂದು ಅಕ್ಕಪಕ್ಕದವರಿಂದ ಇಳಕಲ್ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿದ ಹಿನ್ನೆಲೆ ಪರಿಶೀಲಿಸಲು ನಡೆಸುವ ಜೊತೆಗೆ ಕೋರ್ಟ್ ವಾರೆಂಟ್ ನೋಟೀಸ್ ಮನೆಗೆ ಮುಟ್ಟಿಸಲು ಹೋದ ಇಳಕಲ್ ಪೊಲೀಸರೊಂದಿಗೆ ಮಾಜಿ ಶಾಸಕರು ಏಕವಚನದಲ್ಲಿ ವಾಗ್ವಾದ ನಡೆಸಿ ದುರ್ವರ್ತನೆ ತೋರಿದ್ದಾರೆ.
ಇಳಕಲ್ ನಗರದ ಕಾಶಪ್ಪನವರ್ ಮನೆಯಲ್ಲಿ ಗಲಾಟೆ ನಡೆದಿದೆ ಎಂಬ ಅಕ್ಕಪಕ್ಕದ ಮನೆಯವರಿಂದ ಪೊಲೀಸ್ ಠಾಣೆಗೆ ಕರೆ ಬಂದಿತ್ತು, ಅದೇ ರೀತಿ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಿಂದ ಹಳೆಯ ಕೇಸ್ ಒಂದಕ್ಕೆ ಸಂಬಂಧಪಟ್ಟಂತೆ ಕಾಶಪ್ಪನವರ್ ಗೆ ನೋಟೀಸ್ ಜಾರಿಯಾಗಿತ್ತು, ಹೀಗಾಗಿ ಹುನಗುಂದ ಸಿಪಿಐ ಹೊಸಕೇರಪ್ಪ ಹಾಗೂ ಹಾಗೂ ಇಳಕಲ್ ನಗರ ಠಾಣೆ ಎಸ್.ಬಿ ಪಾಟೀಲ್ ಕಾಶಪ್ಪವರ್ ಮನೆಗೆ ಭೇಟಿ ನೀಡಿದಾಗ, ಸಿಪಿಐ,ಪಿ ಎಸ್ ಐ ಜೊತೆ ವಾಗ್ವಾದ ನಡೆಸಿದ ಮಾಜಿ ಶಾಸಕ ಕಾಶಪ್ಪನವರ್, ನಮ್ಮ ಮನೆಯಲ್ಲಿ ಗಲಾಟೆ ಎಲ್ಲಿ ಆಗಿದೆ ಸಾಬೀತು ಮಾಡಿ, ಎಲ್ಲಿದೆ ಎಸ್.ಪಿ ಆದೇಶ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ.
ನಮ್ಮ ಮನೆಗೆ ಹೇಗೆ ಬಂದ್ರಿ ಎಂದು ಪೊಲೀಸರ ಮೇಲೆ ಗರಂ ಆದ ಕಾಶಪ್ಪನವರ್, ಪೊಲೀಸರೊಂದಿಗೆ ಏಕವಚನದಲ್ಲಿ ವಾಗ್ವಾದ ನಡೆಸಿದ್ರು, ನೀವು ವಾರೆಂಟ್ ಅಂತ ಬಂದಿಲ್ಲ, ನಮ್ಮ ಮನೆಯಲ್ಲಿ ಗಲಾಟೆ ಅಂತ ಹೇಳಿದ್ದಾರೆ ಅದಕ್ಕೆ ಬಂದಿದ್ದೀರಿ ಎಂದು ಪೊಲೀಸರ ಜೊತೆ ಏಕವಚನದಲ್ಲಿ ವಾಗ್ವಾದ ನಡೆಸಿದ್ರು. ನಾನು ಇದನ್ನ ತನಿಖೆಗೆ ಕೊಡುತ್ತೇನೆ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಲ್ಲದೇ, ಆರೆಸ್ಟ್ ಮಾಡಿ ಎಂದು ಪಟ್ಟು ಹಿಡಿದು ಪೊಲೀಸ್ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿರು.
ಕೇಸ್ ಹಾಕ್ತಿನಿ ನೋಡ್ಕೊತಿನಿ ಅಂದಿದ್ದೀರಿ, ಅರೆಸ್ಟ್ ಮಾಡಿ, ಎಷ್ಟು ಕೇಸ್ ಮಾಡ್ತಿರಿ ಮಾಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ರು. ನಾವು ನೋಟೀಸ್ ನೀಡಲು ಬಂದಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಎಷ್ಟೇ ಹೇಳಿದ್ರೂ, ಸ್ಪಂದಿಸದ ಕಾಪ್ಪನವರ್, ಸರ್ಚ್ ವಾರಂಟ್ ಇಲ್ಲದೇ ನನ್ನ ಮನೆಗೆ ಆಕ್ರಮವಾಗಿ ನುಗ್ಗಿದೀರಿ ಎಂದು ಪೊಲೀಸರ ವಿರುದ್ಧವೇ ಆರೋಪ ಮಾಡಿದ್ರಲ್ಲದೇ, ಸ್ಥಳಕ್ಕೆ ಎಸ್.ಪಿ ಬರಬೇಕು ಎಂದು ಪಟ್ಟುಹಿಡಿದಿರೋ ಕಾಪ್ಪನವರ್, ಮನೆಯಲ್ಲಿ ಬೆಂಬಲಿಗರನ್ನು ಕರೆದುಕೊಂಡು ಕೂತಿದ್ದರು.
ಸ್ಥಳೀಯ ಶಾಸಕ ದೊಡ್ಡನಗೌಡ ಪಾಟೀಲ್ ಕುಮ್ಮಕ್ಕಿನಿಂದ ನಮ್ಮ ಮನೆಗೆ ಬಂದು ದೌರ್ಜನ್ಯ ಮಾಡ್ತಿದಿರಿ ಎಂದು ಆರೋಪಿಸಿ, ಪೊಲೀಸ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸ್ತಿದ್ದಾರೆ