12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿದ್ದ ರವಿ ಡಿ ಚನ್ನಣ್ಣನವರ್ ಸೇರಿದಂತೆ ಒಟ್ಟು 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಚನ್ನಣ್ಣನವರ್ ಅವರನ್ನು ಸಿಐಡಿ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಮೈಸೂರು ಎಸ್ಪಿಯಾಗಿದ್ದ ಸಿ.ಬಿ ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕರಾವಳಿ ಭದ್ರತಾ ಪಡೆ ಎಸ್ಪಿ ಆರ್ ಚೇತನ್ – ಮೈಸೂರು ಎಸ್ಪಿ; ಕೋಲಾರ ಜಿಲ್ಲೆಯ ಎಸ್ಪಿ ಕಾರ್ತಿಕ್ ರೆಡ್ಡಿ – ಬೆಂಗಳೂರು ಎಸ್ಪಿ; ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ ರಾಹುಲ್ ಕುಮಾರ್ ಶಹಾಪೂರ್ವದ್ – ತುಮಕೂರು ಎಸ್ಪಿ; ದಾವಣಗೆರೆ ಜಿಲ್ಲೆಯ ಎಸ್ಪಿ ಹನುಮಂತರಾಯ ಹಾವೇರಿ ಜಿಲ್ಲೆಗೆ; ಮೈಸೂರಿನ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್. ಪ್ರಕಾಶ್ ಗೌಡ – ಬೆಂಗಳೂರು ಆಂತರಿಕ ಭದ್ರತಾ ವಿಭಾಗ; ಹಾವೇರಿ ಜಿಲ್ಲೆಯ ಎಸ್ಪಿ ಕೆ.ಜಿ. ದೇವರಾಜು – ಬೆಂಗಳೂರು ಸಿಐಡಿ ಎಸ್ಪಿ; ಮೈಸೂರಿನ ಎಸ್ಪಿ ಸಿ.ಬಿ. ರಿಷ್ಯಂತ್ ದಾವಣಗೆರೆ ಜಿಲ್ಲೆಗೆ; ಕಲಬುರಗಿ ಜಿಲ್ಲೆಯ ಡಿಸಿಪಿ ಡೆಕ್ಕ ಕಿಶೋರ್ ಬಾಬು – ಕೋಲಾರ ಜಿಲ್ಲೆಯ ಎಸ್ಪಿ; ತುಮಕೂರಿನ ಎಸ್ಪಿ ಡಾ. ಕೋನಾ ವಂಶಿ ಕೃಷ್ಣ – ಬೆಂಗಳೂರು ಗ್ರಾಮಾಂತರ ಎಸ್ಪಿ; ಬೆಂಗಳೂರಿನ ಆಂತರಿಕ ಭದ್ರತಾ ಇಲಾಖೆಯ ಎಸ್ಪಿ ಪ್ರದೀಪ್ ಗುಂಟಿ – ಮೈಸೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ; ಬೆಂಗಳೂರಿನ (ವೈರ್ಲೆಸ್) ಎಸ್ಪಿ ಅಡ್ಡೂರು ಶ್ರೀನಿವಾಸುಲು – ಕಲಬುರಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ.