ಈ ಕ್ಷಣ :

ಸನ್ಯಾಸಿ ಆಶೀರ್ವಾದ

Published 16 ಮಾರ್ಚ್ 2023, 14:27 IST
Last Updated 7 ಮೇ 2023, 01:54 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ART LITERATURE:

ರಾಜಪುರವೆಂಬ ಊರು, ಓರ್ವ ಸನ್ಯಾಸಿ ಒಮ್ಮೆ ಆ ಊರಿಗೆ ಬಂದ. ಊರ ಜನರು ಭಯ ಭಕ್ತಿಯಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಆದರಾತಿಥ್ಯ ನೀಡಿ ತಮ್ಮನ್ನು ಹರಸಲು ಬೇಡಿಕೊಂಡರು. ಸಂತೃಪ್ತನಾದ ಸನ್ಯಾಸಿ ಕೈ ಎತ್ತಿ ' ಮುದುಕರೇ ನೀವು ಮೊದಲು ಸತ್ತು ಹೋಗಿರಿ, ನಿಮ್ಮ ಸ್ಥಾನಕ್ಕೆ ಬಂದ ಯುವಕರು ನಂತರ ಸಾಯಲಿ, ನಿಮ್ಮ ನಿಮ್ಮ ಮಕ್ಕಳೂ ಮೊಮ್ಮಕ್ಕಳನ್ನು ಕಂಡು ಸಾಯುವಂತಾಗಲಿ' ಎಂದು ಹರಸಿ ಹೊರಟುಹೋದ.
ನೆರೆದ ಜನರೆಲ್ಲ ಒಂದು ಕ್ಷಣ ಸ್ತಂಭೀಭೂತರಾದರು, ಇದೆಂತಹ ಆಶೀರ್ವಾದ ? ಚೇತರಿಸಿ ಕೊಂಡ ಅನೇಕರು ಸನ್ಯಾಸಿಯ ವಿರುದ್ಧ ಧಿಕ್ಕಾರ ಕೂಗಿದರು, ಕೆಲವರು ಕತ್ತಿ ಹಿಡಿದು ಅವರನ್ನು ಇರಿಯಲು ಹೊರಟರು. ಏನೋ ಸೇವೆ ಸತ್ಕಾರಗಳಿಂದ ಸಂಪ್ರೀತನಾಗಿ ಊರ ಒಳಿತಿಗಾಗಿ ಹರಸುವನೆಂದು ತಿಳಿದರೆ ಅವನು ಎಲ್ಲರೂ ಸಾಯಲಿ ಎಂದು ಶಪಿಸುವುದೇ! ಎಂದು ಗಲಾಟೆ ಜೋರಾಯಿತು. ಆಗ ಆ ಅತೀ ವೃದ್ಧ ಹಾಗೂ ಹೆಚ್ಚುತಿಳಿದವನೊಬ್ಬ ಎದ್ದು ನಿಂತು ಕೂಗಿದ. ನೀರಿನಲ್ಲಿ ಕತ್ತಿ ಹಿಡಿದು ಹೊರಟವರು ಹೋಗದಿರಿ, ಘೋಷಣೆ ಕೂಗುತ್ತಿರುವವರೂ ಕೂಗದಿರಿ ಗಲಾಟೆ ಮಾಡುತ್ತಿರುವವರೂ ಮಾಡದಿರಿ. ಆ ಸನ್ಯಾಸಿ ತಪ್ಪಾಗಿ ಹರಸಿಲ್ಲ. ಒಳಿತನ್ನೇ ಬಯಸಿ ಹರಸಿದ್ದಾರೆ. ಸಾಯಲಿ ಎಂದು ಕೈ ಎತ್ತಿ ಶಪಿಸುವುದು ಹರಸುವುದೆಂದು ಅರ್ಥವೇನು? ಈ ಮುದುಕನಿಗೂ ಮುದಿತನದ ಹುಚ್ಚು ಹಿಡಿದಿರಬೇಕು. ನಡೆಯಿರಿ ಎಲ್ಲಾ ಪ್ರತಿಕಾರ ತೀರಿಸಿಕೊಳ್ಳೋಣ ಎಂದು ಕೆಲವು ಮಂದಿ ಸಿಟ್ಟಿನಿಂದ ಹಾರಾಡಿದರು. ಅದಕ್ಕೆ ವೃದ್ಧ ಶಾಂತಿ…… ಶಾಂತಿ ….. ದಯವಿಟ್ಟು ನನ್ನ ಮಾತು ಮೊದಲು ಪೂರ್ತಿ ಕೇಳಿಸಿಕೊಳ್ಳಿ. ಮುದುಕರು ಮೊದಲು ಸಾಯಿರಿ ಅಂದರೆ, ಹೇಗೂ ಅವರು ತಮ್ಮ ಜೀವಿತಾವಧಿ ಕಳೆದವರಾಗಿದ್ದಾರೆ. ಇನ್ನು ಅವರೆದುರೇ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಸತ್ತರೆ ಅವರಿಗೆ ಪುತ್ರ ಶೋಕಾದಿಗಳು ಕಾಡುವುದಿಲ್ಲವೇ? ಹೀಗಾಗಿ ಇಹಲೋಕದ ಯಾತ್ರೆ ಮುಗಿಯುವಂತಾಗಲಿ ಎಂಬುವುದು ಅದರ ಅರ್ಥ. ಮುದುಕರ ಸ್ಥಾನಕ್ಕೆ ಬಂದ ಯುವಕರು ನಂತರ ಸಾಯಲಿ ಎಂದರೆ ಅವರೂ ತಮ್ಮ ಹಿರಿಯರ ಹಾಗೆ ಪೂರ್ಣಾಯುಷ್ಯ ಬಾಳಿ ಬುದುಕಿ ತದನಂತರವಷ್ಟೇ ಅಸುನೀಗಲಿ ಎಂದು. ನಂತರ ಮಕ್ಕಳು ಅವರ ಮೊಮ್ಮಕ್ಕಳನ್ನು ಕಂಡು ಸಾಯಲಿ ಅಂದರೆ ಅವರೂ ತಂದೆ ತಾತರಂತೆ ಮುದುಕರಾದ ಮೇಲೆ ಹಸುನೀಗಿದರೆ ಸಾಕು ಎಂದರ್ಥ, ಯಾರೂ ರೋಗರುಜಿನಾದಿಗಳು ಬಂದು ,ಅನ್ಯರ ಅಕ್ರಮಣ ದಾಳಿ ತಿಂದು ಅರ್ಧಾಯುಷ್ಯದಲ್ಲೇ ಮೃತ್ಯು ಹೊಂದದಂತಾಗಲಿ ಎಂದು ಆಶೀರ್ವಾದ ಮಾಡಿ ಹೋಗಿದ್ದಾರೆ ಎಂದು ವಿವರಿಸಿದ. ಅರ್ಥ ತಿಳಿಯುತ್ತಿದ್ದಂತೆ ಎಲ್ಲರೂ ಸನ್ಯಾಸಿಯ ಗುಣಗಾನ ಮಾಡಿ ಜಯಕಾರದ ಘೋಷಣೆ ಕೂಗಿದರು
ನೀತಿ: ಆತುರಗಾರನಿಗೆ ಬುದ್ದಿ ಮಟ್ಟ


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45