BUSINESS:
ವಿಶೇಷ ವರದಿ
Illegal layouts ಬೆಂಗಳೂರು: ನಗರ ಪ್ರದೇಶದಲ್ಲಿ ನಾಯಿಕೊಡೆಯಂತೆ ಅಕ್ರಮ ವಸತಿ ಬಡಾವಣೆಗೆ ಕಡಿವಾಣ ಹಾಕಿ ನಿವೇಶನ ಕೊಳ್ಳುವ ಜನ ಮೋಸ ಹೋಗದಂತೆ ಮಾಡಲು ಕಂದಾಯ ಇಲಾಖೆ ಲಗಾಮು ಹಾಕಲು ಮುಂದಾಗಿದೆ. ಇನ್ನು ಮುಂದೆ ತುಂಡು ಕೃಷಿಭೂಮಿ ಪರಿವರ್ತನೆಗೆ ಹೊಸ ಸರ್ವೆ ನಂಬರ್ ನೀಡದಿರುವ ದಿಟ್ಟ ತೀರ್ಮಾನ ಕೈಗೊಂಡಿದೆ. ತುಂಡು ಭೂಮಿಯನ್ನು ಕಾನೂನಿನ ಪ್ರಕಾರ ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡದೆ ಅಲ್ಲಿ ನಿವೇಶನ ಮಾರಾಟ ಮಾಡದಂತೆ ಕಂದಾಯ ಇಲಾಖೆ ಕಡಿವಾಣ(Revenu Department Curb) ಹಾಕಲು ನಿರ್ಧರಿಸಿದೆ.
ಸಾಮಾನ್ಯವಾಗಿ ಇಂತಹ ಸಣ್ಣ ಭೂಮಿ, ನಿವೇಶನಗಳಿಗೆ ಪ್ರತ್ಯೇಕ ಸರ್ವೆ ನಂಬರ್ ಪಡೆದುಕೊಂಡು ಅಲ್ಲಿ ನಿವೇಶನಗಳನ್ನು ಮಾಡಿ ಮಾರಾಟ ಮಾಡುವ ಕಲೆಯನ್ನು ಡೆವಲಪರ್(Devoloper)ಗಳು ಸಿದ್ದಿಸಿಕೊಂಡು ಬಡವರು ಮತ್ತು ಅಮಾಯಕರಿಗೆ ಮೋಸ ಮಾಡುವುದು ಸಾಮಾನ್ಯವಾಗಿದ್ದು . ಇದಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆ ಕಠಿಣ ನಿಯಮ ಜಾರಿಗೊಳಿಸಲು ಹೊರಟಿದೆ.
ಸಾಮಾನ್ಯವಾಗಿ ಇಂತಹ ಸಣ್ಣ ಭೂಮಿ, ನಿವೇಶನಗಳಿಗೆ ಪ್ರತ್ಯೇಕ ಸರ್ವೆ(Separate Servey #) ನಂಬರ್ ಪಡೆದುಕೊಂಡು ಅಲ್ಲಿ ನಿವೇಶನಗಳನ್ನು ಮಾಡಿ ಮಾರಾಟ ಮಾಡುವ ಕಲೆಯನ್ನು ಡೆವಲಪರ್ ಗಳು ಸಿದ್ದಿಸಿಕೊಂಡು ಬಡವರು ಮತ್ತು ಅಮಾಯಕರಿಗೆ ಮೋಸ ಮಾಡುವುದು ಸಾಮಾನ್ಯವಾಗಿದ್ದು . ಇದಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆ ಕಠಿಣ ನಿಯಮ(Strick Rule) ಜಾರಿಗೊಳಿಸಲು ಹೊರಟಿದೆ.
ನಗರ ಪ್ರದೇಶದಲ್ಲಿ ಹೇಗಾದರೂ ಮಾಡಿ ತಲೆ ಮೇಲೆ ಸೂರು ಕಟ್ಟಿಕೊಳ್ಳಬೇಕು ಎಂಬ ಸಾಮಾನ್ಯ ಜನರ ಬದುಕಿನ ದೊಡ್ಡ ಕನಸನ್ನೇ ಬಂಡವಾಳ ಮಾಡಿಕೊಳ್ಳುವ ಡೆವಲಪರ್ ಗಳು ಹೇಗಾದರೂ ಮಾಡಿ ಕಂದಾಯ ಇಲಾಖೆಯ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ಪ್ರತ್ಯೇಕ ಸರ್ವೆ ನಂಬರ್ ತೆಗೆದುಕೊಂಡು ನಿವೇಶನ ಮಾಡಿ ಅಮಾಯಕರಿಗೆ ಮಾರಾಟ ಮಾಡಿಬಿಡುತ್ತಾರೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಮೂರು ಗುಂಟೆ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ 5 ಗುಂಟೆ ತುಂಡು ಕೃಷಿ ಭೂಮಿಗೆ ಹೊಸ ಸರ್ವೆ ನಂಬರ್ ನೀಡದಿರಲು ಹಾಗೂ ನೋಂದಣಿಗೆ ಅಗತ್ಯವಾಗಿ ಬೇಕಿರುವ 11ಇ - ನಮೂನೇ ಸ್ಕೆಚ್ ನಕ್ಷೆ ಸಹ ನೀಡದಿರಲು ಕಂದಾಯ ಇಲಾಖೆ ನಿರ್ಧರಿಸಿದೆ.
ಸಾಮಾನ್ಯವಾಗಿ ಇಂತಹ ತುಂಡು ಭೂಮಿಗಳಲ್ಲಿ ಕೃಷಿ ಚಟುವಟಿಕೆ ಮಾಡಲು ಸಾಧ್ಯವಿಲ್ಲ.ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು, ಪ್ರತ್ಯೇಕ ಸರ್ವೆ ನಂಬರ್ ತೆಗೆದುಕೊಂಡು ಕೃಷಿಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸದೇ(Agri Land Convertion) ನಿವೇಶನ ಹಂಚಿಕೆ ಮಾಡುತ್ತಿರುವ ಚಟುವಟಿಕೆಗಳು ಬೆಂಗಳೂರು(Bangalore) ಸೇರಿದಂತೆ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ವ್ಯಾಪಕವಾಗಿದೆ.
ನಿಯಮಾವಳಿ ಪ್ರಕಾರ ಯಾವುದೇ ಹೊಸ ಬಡಾವಣೆಯಲ್ಲಿ, ರಸ್ತೆ ನಿರ್ಮಾಣ, ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಗಾಗಿ ಅರ್ಧ ಜಾಗವನ್ನು ಖಾಲಿ ಬಿಡಬೇಕಾಗುತ್ತದೆ. ಆದರೆ ಇಂತಹ ತುಂಡು ಭೂಮಿಯಲ್ಲಿ ನಿವೇಶನಗಳನ್ನು ನಿರ್ಮಾಣ ಮಾಡುವುದರಿಂದ ಅಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸಲು ಜಾಗವೇ ಇರುವುದಿಲ್ಲ. ಹೀಗಾಗಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆ ಹೊರಟಿದೆ ಎಂದು ಕಮೀಷನರ್ ಆಫ್ ಸರ್ವೇ ಸೆಟಲ್ಮೆಂಟ್ ಅಂಡ್ ಲ್ಯಾಂಡ್ ರೆಕಾರ್ಡ್ಸ್ ಆಯುಕ್ತ ಮುನೀಶ್ ಮೌದ್ಗಿಲ್(Munish Mudgil) ಹೇಳುತ್ತಾರೆ.
ಇಂತಹ ತಂಡು ಕೃಷಿ ಭೂಮಿಗಳಿಗೆ ಇನ್ನು ಮುಂದೆ ಪ್ರತ್ಯೇಕ ಸರ್ವೆ ನಂಬರ್ ನೀಡದೆ ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗುವ ಮೂಲಕ ತುಂಡು ಭೂಮಿ ಮತ್ತಷ್ಟು ತುಂಡಾಗುವುದನ್ನು ಎಲ್ಲಕ್ಕಿಂತ ಮುಖ್ಯವಾಗಿ ನಗರ ಪ್ರದೇಶಗಳಲ್ಲಿನಾಯಿಕೊಡೆಗಳಂತೆ ಅಕ್ರಮ ಬಡಾವಣೆಗಳು ನಿರ್ಮಾಣವಾಗದಂತೆ ಕಡಿವಾಣ ಹಾಕಲು ಈ ಹೊಸ ನಿಯಮ ತರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.