DISTRICT:
ಬೆಳಗಾವಿ: ಅಥಣಿಯ ಹಲ್ಯಾಳ ಕೃಷ್ಣಾ ನದಿಯ ದುರಂತದಲ್ಲಿ ನೀರು ಪಾಲಾಗಿದ್ದ ನಾಲ್ವರ ಶವ ಪತ್ತೆಯಾಗಿವೆ. NDRF, ಸ್ಕೋಬಾ ಡೈವಿಂಗ, ಸ್ಥಳಿಯ ಅಗ್ನಿಶಾಮಕ ದಳ ಸಿಬ್ಬಂದಿ ಸತತ ಪರಿಶ್ರಮದಿಂದ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಕಳೆದ ಮಂಗಳವಾರಪರಶುರಾಮ್ ಗೋಪಾಲ ಬನಸೋಡೆ (24) ಶವ ಸಿಕ್ಕರೆ ಇಂದು ಮೂವರ ಶವ ಪತ್ತೆಯಾಗಿವೆ.
ಓರ್ವ ಸಹೋದರ ನೀರಿಗೆ ಬಿದ್ದಾಗ, ಅವನನ್ನು ರಕ್ಷಿಸಲು ಮೂರು ಜನ ಸಹೋದರ ಮುಂದಾಗುತ್ತಿದ್ದಂತೆ ಅವರು ಕೂಡ ಆಯಾ ತಪ್ಪಿ ನೀರಿಗೆ ಬಿದ್ದು ಜಲಸಮಾಧಿಯಾಗಿದ್ದು ದುರಂತ.ಸಾರ್ವಜನಿಕ ಆಸ್ಪತ್ರೆಗೆ ಗೋಪಾಲ ಬನಸೋಡೆ (20) ಧರೆಪ್ಪ ಗೋಪಾಲ ಬನಸೋಡೆ( 29)ಸದಾಶಿವ ಬನಸೋಡೆ (22) ಶಂಕರ ವರ್ಷದ ಸಹೋದರರನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.