DISTRICT:
ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಜೋರಾಗಿದ್ದು, ನೇತ್ರಾವತಿ ನದಿನೀರಿನ ಮಟ್ಟ ಏರಿಕೆಯಾಗಿದೆ ಗುರುವಾರ ಸಂಜೆವೇಳೆಗೆ ಬಂಟ್ವಾಳ ಸಮೀಪ 7 ಮೀ. ಎತ್ತರಕ್ಕೇರಿದೆ.
ಧಾರಾಕಾರ ಮಳೆ ನಿರಂತರವಾಗಿ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ 1.5 ಮೀಟರ್ ಹೆಚ್ಚಾದರೆ, ಅಂದರೆ, 8.5 ಮೀಟರ್ ಏರಿದರೆ ಅಪಾಯದ ಮಟ್ಟ ತಲುಪಲಿದೆ. ದ.ಕ.ಜಿಲ್ಲೆಯ ಸುಬ್ರಹ್ಮಣ್ಯ, ಧರ್ಮಸ್ಥಳ, ಬೆಳ್ತಂಗಡಿ ಮುಂತಾದೆಡೆ ಧಾರಾಕಾರ ಮಳೆ ಸುರಿಯತೊಡಗಿದೆ.