ಈ ಕ್ಷಣ :

ಬಿಗ್ಬಾಸ್ ಮನೆಯಿಂದ ಹೊರಬಂದ ರಘು ಪತ್ನಿ ವಿದ್ಯಾಶ್ರೀ ಸಂದರ್ಶನ

Published 16 ಮಾರ್ಚ್ 2023, 12:20 IST
Last Updated 7 ಮೇ 2023, 01:54 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ENTERTAINMENT:

ಪೂರ್ಣ ವಿ-ರಾಮ

ರಘು ವೈನ್ ಸ್ಟೋರ್ ಎಂಬ ಯಶಸ್ವೀ ಯೂ ಟ್ಯೂಬ್ ಚಾನೆಲ್ನ ರೂವಾರಿ ರಘು ಗೌಡ ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಮಾತಿನಲ್ಲೇ ಮನೆ ಮೇಲೆ ಮನೆ ಕಟ್ಟುವ ರಘು ಗೌಡ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. ಅವರ ಕೆಲವ ಫ್ಯಾಮಿಲಿ ರಿಲೇಟೆಡ್ ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಪಡೆಯುತ್ತವೆ. ಅವರು ಹಾಗೂ ಅವರ ಪತ್ನಿ ವಿದ್ಯಾಶ್ರೀ ರಘು ಗೌಡ ಸೇರಿ ಮಾಡುವ ಅಡುಗೆ ಮನೆಯ ಕಾಮಿಡಿ, ಗಂಡ ಹೆಂಡತಿ ನಡುವಿನ ಕೀಟಲೆ, ತರಲೆ, ತಮಾಷೆಯ ವೀಡಿಯೋಗಳು ಇವತ್ತಿಗೂ ಟ್ರೆಂಡಿಂಗ್. ಇವತ್ತಿಗೂ ಅವರಿಗೆ ಅವರದ್ದೇ ಅಭಿಮಾನಿ ಬಳಗ ಹೊಂದಿರುವ ರಘು ಗೌಡ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಅಂದರೆ ನಿನ್ನೆ ಪ್ರಸಾರವಾದ ಎಪಿಸೋಡ್ನಲ್ಲಿ ಅವರು ಎಲಿಮಿನೇಟ್ ಆಗಿದ್ದು, ಅವರಿನ್ನೂ ಅವರ ಮನೆ ಸೇರಿಲ್ಲ. ಈ ಹೊತ್ತಿನಲ್ಲಿ ಅವರ ಮಡದಿ ವಿದ್ಯಾಶ್ರೀ ನಮಗೆ ಮಾತಿಗೆ ಸಿಕ್ಕಿದ್ದರು.

-ವಿದ್ಯಾಶ್ರೀ ಅವರೇ, ರಘು ಗೌಡ ಔಟ್ ಆಗಿದ್ದು ಬೇಸರ ಆಯ್ತಾ?
ವಿದ್ಯಾಶ್ರೀ:
ಖಂಡಿತ ಇಲ್ಲ. ಅವರು ಅವರಾಗಿ ಇದ್ದರು. ಅವರಾಗಿ ಹೊರಬಂದರು. ಅವರಿಗೆ ಅವರನ್ನ ಪ್ರೂವ್ ಮಾಡಿಕೊಳ್ಳುವ ಅವಕಾಶ ಸಿಕ್ಕಿತು. ಎರಡನೇ ಇನ್ನಿಂಗ್ಸ್ನಲ್ಲಿ ಮೂರು ವಾರ ತುಂಬಾ ಚೆನ್ನಾಗಿ ಮನರಂಜಿಸಿದ್ರು. ತುಂಬಾ ಎಂಜಾಯ್ ಮಾಡ್ಕೊಂಡು ಮನೆಯಲ್ಲಿದ್ರು!

-ನಿಮ್ಮ ಮನೆಯವರು ಟಾಸ್ಕ್ ತೆಗೆದುಕೊಳ್ಳುವ ವಿಚಾರದ ಬಗ್ಗೆ ಹೇಳುವುದಾದರೆ?
ವಿದ್ಯಾಶ್ರೀ:
ಮೊದಲ ಇನ್ನಿಂಗ್ಸ್ಗೆ ಕಂಪೇರ್ ಮಾಡಿದರೆ ಅವರು ಪ್ರತೀ ಹಂತದಲ್ಲೂ ತುಂಬಾ ಚೆನ್ನಾಗಿ ತೊಡಗಿಕೊಂಡಿದ್ದರು. ದಿನದಿಂದ ದಿನಕ್ಕೆ ಅವರು ಇಂಪ್ರೂವ್ ಆಗ್ತಾ ಇದ್ದರು. ಅವರಿಗೆ ಕೆಪಾಸಿಟಿ ಇದೆ ಅಂತ ನನಗೆ ಗೊತ್ತಿತ್ತು. ಅದನ್ನು ಅವರು ಮೂರೂ ವಾರ ಯಶಸ್ವಿಯಾಗಿ ಪ್ರದರ್ಶಿಸಿದ್ರು!

-ನಿಮ್ಮ ಪ್ರಕಾರ ಅವರು ಈ ವಾರ ಯಾಕೆ ಔಟ್ ಆದ್ರು?
ವಿದ್ಯಾಶ್ರೀ:
ಇನ್ನೂ ಇರಬಹುದಾಗಿತ್ತು ಅನ್ನಿಸ್ತು ನನಗೆ. ಇವರಿಗಿಂತ ಕಮ್ಮಿ ಎಂಟರ್ಟೈನ್ ಮಾಡೋರು ಇನ್ನೂ ಇದ್ದಾರೆ ಅಲ್ಲಿ. ಅವರಿಗೆ ಹೋಲಿಸಿದರೆ ರಘು ತುಂಬಾನೇ ಚೆನ್ನಾಗಿ ಟಾಕ್ಸ್ ತೆಗೆದುಕೊಂಡು, ಜನಕ್ಕೆ ಮನರಂಜನೆ ಕೂಡ ಮಾಡಿಕೊಂಡು ಇದ್ದರು. ಮೇ ಬಿ ಅರವಿಂದ್ ಅವರ ಗೇಮ್ ಚೇಂಜ್ ವಿಷಯದಲ್ಲಿ ರಘು ಛಾನ್ಸ್ ತೆಗೆದುಕೊಳ್ಳದೇ ಇರುವುದೂ ಒಂದು ಕಾರಣವಾಗಿರಬಹುದು!

-ರಘು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮತ್ತೆ ನೀವು ಫ್ಯಾಮಿಲಿ ವೀಡಿಯೋಸ್ ಮಾಡ್ತೀರಾ?
ವಿದ್ಯಾಶ್ರೀ:
ಖಂಡಿತ. ಅವರು ಮಂಗಳವಾರ ಮನೆಗೆ ಬರ್ತಾರೆ. ಅವರು ಬಂದ ಮೇಲೆ ಅವರೇ ಸ್ಕ್ರಿಪ್ಟ್ ಎಲ್ಲಾ ಮಾಡ್ತಾರೆ. ಅವರಿಂದಲೇ ರಘು ವೈನ್ ಸ್ಟೋರ್ ಚಾನೆಲ್ ನಿಂತಿರೋದು. ಅವರು ಬಂದ ಮರುಕ್ಷಣವೇ ನಮ್ಮ ಫ್ಯಾಮಿಲಿ ವೀಡಿಯೋಸ್ ಶೂಟಿಂಗ್ ಶುರು!

-ರಘು ಅವರನ್ನ ಈ ಸಮಯದಲ್ಲಿ ಎಷ್ಟು ಮಿಸ್ ಮಾಡ್ಕೊಂಡ್ರಿ?
ವಿದ್ಯಾ ಶ್ರೀ:
ನಿಜ್ವಾಗ್ಲೂ ತುಂಬಾ ಬೇಜಾರು ಆಗೋದು. ಆದ್ರೆ ಅವ್ರು ಸಂಜೆ ಆದ್ಮೇಲೆ ಟೀವಿಯಲ್ಲಿ ಬರ್ತಾರೆ ಎಂಬ ಖುಷಿಯಲ್ಲಿ ಆ ಇಡೀ ದಿನವನ್ನ ಹೇಗೋ ಕಳೀತಾ ಇದ್ದೆ. ಅವರು ತುಂಬಾ ಲವಲವಿಕೆಯಿಂದ ಟಾಸ್ಕ್ ತೆಗೆದುಕೊಳ್ಳುವುದು, ಮಾತನಾಡುವುದು ನೋಡಿದಾಗ ಅವರನ್ನ ಮಿಸ್ ಮಾಡ್ಕೊಂತಾ ಇದ್ದೀನಿ ಅನ್ನೋ ವಿಷ್ಯವೇ ಮರೆತುಹೋಗೋದು!


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45