ಈ ಕ್ಷಣ :

''ಕೆಜಿಎಫ್ 2' ಸಿನಿಮಾ ನಕಲು ಮಾಡಲು ಹೋದರೆ ಸೋಲು ಗ್ಯಾರೆಂಟಿ'

Published 16 ಮಾರ್ಚ್ 2023, 14:45 IST
Last Updated 6 ಮೇ 2023, 20:51 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ENTERTAINMENT:

'ಕೆಜಿಎಫ್ 2' ಸಿನಿಮಾ ಹಲವು ಸಿನಿಮಾ ಕರ್ಮಿಗಳಿಗೆ, ನಿರ್ಮಾಪಕರಿಗೆ, ಮೂವಿ ಪ್ರಮೋಷನ್ ಮಾಡುವವರಿಗೆ ಒಂದು ರೀತಿ ಸ್ಪೂರ್ತಿ. ಮಾಡಿದರೆ 'ಕೆಜಿಎಫ್ 2' ಮಾದರಿ ಸಿನಿಮಾ ಮಾಡಬೇಕು ಎಂದು ಹಲವು ನಿರ್ದೇಶಕರು, ನಿರ್ಮಾಪಕರು ಅಂದುಕೊಂಡಿದ್ದಾರೆ.

ಆದರೆ ಇಲ್ಲೊಬ್ಬ ಬಾಲಿವುಡ್‌ನ ಸ್ಟಾರ್ ನಿರ್ದೇಶಕ, 'ಕೆಜಿಎಫ್ 2' ರೀತಿಯ ಸಿನಿಮಾ ಮಾಡಲು ಹೋದರೆ ಸೋಲುವುದು ಖಂಡಿತ, 'ಕೆಜಿಎಫ್ 2' ಸಿನಿಮಾದ ಹಿಂದೆ ಹೋದರೆ ಚಿತ್ರರಂಗವೇ ಹಾಳಾಗುತ್ತದೆ ಎಂದಿದ್ದಾರೆ.

'ಗ್ಯಾಂಗ್ಸ್ ಆಫ್ ವಾಸೆಪುರ್', 'ದೇವ್ ಡಿ', 'ನೋ ಸ್ಮೋಕಿಂಗ್', 'ಬಾಂಬೆ ಟಾಕೀಸ್' ಇನ್ನೂ ಹಲವು ಭಿನ್ನ ಮಾದರಿಯ ಸಿನಿಮಾಗಳನ್ನು ಮಾಡಿರುವ ಅನುರಾಗ್ ಕಶ್ಯಪ್ ತಮ್ಮ ಬಿಡುಬೀಸು ಮಾತುಗಳಿಗೂ ಸಹ ಬಹಳ ಪ್ರಖ್ಯಾತರು. ಸಂದರ್ಶನವೊಂದರಲ್ಲಿ ಬಾಲಿವುಡ್‌ ಬಗ್ಗೆ ಮಾತನಾಡುತ್ತಾ 'ಕೆಜಿಎಫ್ 2' ಸಿನಿಮಾದ ರೆಫರೆನ್ಸ್‌ ಅನ್ನು ಅವರು ತಂದಿದ್ದಾರೆ.

ಈಗ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಅಲ್ಲಿ ಯಶಸ್ಸು ಎನ್ನುವುದು 5% ಅಥವಾ 10% ಅಷ್ಟೆ. 'ಕಾಂತಾರ', 'ಪುಷ್ಪ' ದಂಥಹಾ ಸಿನಿಮಾಗಳು ನಿಮ್ಮ ಭಾಗದ ಕತೆಗಳನ್ನು ಜನರಿಗೆ ಹೇಳಲು ಸ್ಪೂರ್ತಿ ನೀಡುತ್ತವೆ. ಅದೇ ನೀವು 'ಕೆಜಿಎಫ್ 2' ಸಿನಿಮಾ ನೋಡಿ ಅಂಥಹಾ ಸಿನಿಮಾ ಮಾಡುತ್ತೇನೆಂದು ಹೋದರೆ ಧಾರುಣ ಸೋಲು ಕಾಣುತ್ತೀರಿ. ಇಂಥಹಾ ಪ್ರಯತ್ನಗಳಿಂದಲೇ ಬಾಲಿವುಡ್ ಇಂದು ಸತತ ಸೋಲು ಕಾಣುತ್ತಿರುವುದು ಎಂದಿದ್ದಾರೆ ಅನುರಾಗ್ ಕಶ್ಯಪ್.

ಇದೇ ಸಂದರ್ಶನದಲ್ಲಿ ಮರಾಠಿಯ ಸೂಪರ್-ಡೂಪರ್ ಹಿಟ್ ಸಿನಿಮಾ 'ಸೈರಾಟ್' ಬಗ್ಗೆಯೂ ಮಾತನಾಡಿದ್ದ ಅನುರಾಗ್ ಕಶ್ಯಪ್. 'ಸೈರಾಟ್' ಸಿನಿಮಾ ಬಂದು ಮರಾಠಿಯಲ್ಲಿ ಕಡಿಮೆ ಬಜೆಟ್‌ ಸಿನಿಮಾ ಮಾಡಿಯೂ ಕೋಟ್ಯಂತರ ಹಣ ಮಾಡಬಹುದು ಎಂದು ತೋರಿಸಿಕೊಟ್ಟಿತು. ಆ ಬಳಿಕ ಎಲ್ಲರೂ 'ಸೈರಾಟ್' ಮಾದರಿ ಸಿನಿಮಾ ಮಾಡಲು ಮುಂದಾದರು, ಒಳ್ಳೆಯ ಸಿನಿಮಾ ಮಾಡುತ್ತಿದ್ದವರು ಸಹ 'ಸೈರಾಟ್' ಹಿಂದೆ ಓಡಿದರು ಇದರಿಂದಾಗಿ ಮರಾಠಿ ಚಿತ್ರರಂಗವೇ ಹಾಳಾಗಿ ಹೋಯ್ತು ಎಂದಿದ್ದಾರೆ ಅನುರಾಗ್ ಕಶ್ಯಪ್.

'ಕಾಂತಾರ', 'ಪುಷ್ಪ' ಅಂಥಹಾ ಸಿನಿಮಾಗಳು ರೂಟೆಡ್ ಕತೆ ಹೊಂದಿದ್ದು ಇಂಥಹಾ ಸಿನಿಮಾಗಳು ಇಂಥಹಾ ಮಾದರಿಯ ಇನ್ನಿತರೆ ಪ್ರದೇಶದ ಕತೆ ಹೇಳಲು ಸ್ಪೂರ್ತಿ ನೀಡುತ್ತವೆ, ಆದರೆ 'ಕೆಜಿಎಫ್ 2' ಪಕ್ಕಾ ಮಾಸ್ ಸಿನಿಮಾ, ಮಾಸ್ ಸಿನಿಮಾವನ್ನು ನಕಲು ಮಾಡುವುದು ಮೂರ್ಖತನ ಎಂಬುದು ಅನುರಾಗ್ ಕಶ್ಯಪ್ ಮಾತು.


ಹೆಚ್ಚು ಓದಿದ ಸುದ್ದಿ

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಟ ದುನಿಯಾ ವಿಜಯ್ ಗೆ ನೋಟೀಸ್ ಜಾರಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ : ಹೆಚ್.ಡಿ ಕುಮಾರಸ್ವಾಮಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45