ಈ ಕ್ಷಣ :

ಬೇಕಲ್ ಕೋಟೆ ಹಿಂದಿರೋ ಕಥೆ ಗೊತ್ತಾ? ಇದು ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ!

Published 16 ಮಾರ್ಚ್ 2023, 14:27 IST
Last Updated 7 ಮೇ 2023, 01:54 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

SPECIAL:

ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಪ್ರಾಂಗಣ. ಅದರ ನಡುವೆ ಕಪ್ಪು ಕಲ್ಲುಗಳಿಂದ ಬಾನೆತ್ತರಕ್ಕೆ ನಿಂತಿರೋ ತಡೆಗೋಡೆ. ಇದು ನಮ್ಮ ನೆರೆ ರಾಜ್ಯದ ಅಂಚಿನಲ್ಲಿರೋ ಸುಂದರವಾದ ಕೋಟೆ. ಅಂದಾಗೆ ಇದು ಬೇಕಲ್ ಕೋಟೆ. ಈ ಕೋಟೆಯ ಬಗ್ಗೆ ತಿಳಿದುಕೊಳ್ಳೋ ಕೂತುಹಲವಿದ್ರೆ ಪೂರ್ತಿ ಲೇಖನ ಓದಿ.


ನಮ್ಮ ದೇಶದ ಅದ್ಭುತವಾದ ಕೋಟೆಗಳು ತನ್ನದೇ ಶ್ರೀಮಂತ ಇತಿಹಾಸಗಳನ್ನು ಹೊಂದಿವೆ. ಇತಿಹಾಸ ಪ್ರಿಯರು ಕೋಟೆ ಮತ್ತು ಅರಮನೆಗಳ ಅನ್ವೇಷಣೆಯನ್ನು ಅತಿ ಹೆಚ್ಚಾಗಿ ಇಷ್ಟ ಪಡುತ್ತಾರೆ. ತಮ್ಮ ವಾರಾಂತ್ಯ ತಾಣಗಳಲ್ಲಿ ಇಂತಹ ಅತ್ಯದ್ಭುತವಾದ ತಾಣಗಳಿಗೆ ಹೋಗಿ ಏಂಜಾಯ್ ಮಾಡಬೇಕು ಎಂದು ಭಾವಿಸುತ್ತಾರೆ.
ಈ ಬೇಕಲ ಕೋಟೆಯು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಡಲ ತೀರದಲ್ಲಿದೆ. ಇದೊಂದು ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದ್ದು, ಕೇರಳ ರಾಜ್ಯದ ಅತಿ ದೊಡ್ಡದಾದ ಕೋಟೆ ಎಂದು ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ ಈ ಬೇಕಲ ಕೋಟೆಗೆ ಸುಮಾರು 370 ಕಿ.ಮೀ ದೂರದಲ್ಲಿದೆ. ನಿಮ್ಮ ವಾರಾಂತ್ಯದ ಸಮಯದಲ್ಲಿ ಈ ಕೋಟೆಯ ಅನ್ವೇಷಣೆಯನ್ನು ಆಯೋಜಿಸಬಹುದು.

ಕಡಲ ಕಿನಾರೆಯಲ್ಲಿ ಬೇಕಲ್ ಕೋಟೆ ದೃಶ್ಯ


​ಕೋಟೆಗಿದೆ 300 ವರ್ಷದ ಇತಿಹಾಸ

ಸುಮಾರು 300 ವರ್ಷಗಳಷ್ಟು ಹಳೆಯ ರಕ್ಷಣಾತ್ಮಕ ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಕೋಟೆ ಇದಾಗಿದೆ. ಬೇಕಲ ಕೋಟೆಯು ಕಾಸರಗೋಡಿನ ಅತ್ಯುತ್ತಮವಾದ ಪ್ರವಾಸಿ ಕೇಂದ್ರವಾಗಿ ಜನಪ್ರಿಯವಾಗಿದೆ. ಸುಂದರವಾದ ಕಡಲತೀರದ ಬಳಿ ಇರುವ ಈ ಕೋಟೆಯ ನೋಟವು ಎಂಥವರನ್ನು ಮಂತ್ರಮುಗ್ಧಗೊಳಿಸುತ್ತದೆ.
ಇತಿಹಾಸದ ಆಳಕ್ಕೆ ಪ್ರವೇಶಿಸಲು ಈ ಕೋಟೆಯ ಸಮೀಪದಲ್ಲಿರುವ ಹಳೆಯ ಮಸೀದಿಗೆ ಭೇಟಿ ನೀಡಿ. ಕೋಟೆಯ ಸುರಂಗದಲ್ಲಿ ಪ್ರವೇಶ ಪಡೆದ ನಂತರ ಕಡಲತೀರದ ನಯನ ಮನೋಹರವಾದ ದೃಶ್ಯವನ್ನು ಸವಿಯುತ್ತೀರಿ. ಕಾಸರಗೋಡಿನ ದಕ್ಷಿಣಕ್ಕೆ ಕೇವಲ 16 ಕಿ.ಮೀ ದೂರದಲ್ಲಿ ಈ ಬೇಕಲ್‌ ಕೋಟೆ ಇದೆ.
ಪ್ರವೇಶ ಸಮಯ: ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ
ಪ್ರವೇಶ ಶುಲ್ಕ: ಭಾರತೀಯರಿಗೆ ಪ್ರತಿ ವ್ಯಕ್ತಿಗೆ 5 ರೂಪಾಯಿಗಳು, ವಿದೇಶಿಗರಿಗೆ 100 ರೂ ಪ್ರವೇಶ ಶುಲ್ಕವಿರುತ್ತದೆ.
ಕೋಟೆಯ ಸೊಗಸಾದ ನೋಟವನ್ನು ಕಾಣುತ್ತಾ ಕಡಲತೀರದಲ್ಲಿ ಅಡ್ಡಾಡಬಹುದು. ಈ ಕೋಟೆಯು ಸುಮಾರು 40 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ವೀಕ್ಷಣಾ ಗೋಪುರ, ಫಿರಂಗಿಗಳು ಮತ್ತು ರಕ್ಷಣೆಗಾಗಿ ಕಿಂಡಿಗಳನ್ನು ಹೊಂದಿದೆ.
ಇದು ಕೇರಳ ರಾಜ್ಯದ ಅತಿ ದೊಡ್ಡ ಕೋಟೆ ಎಂದು ಜನಪ್ರಿಯವಾಗಿದೆ. ಇನ್ನು ಕೋಟೆಯ ಒಳಭಾಗದಲ್ಲಿ ಹನುಮಂತನ ದೇವಾಲಯ ಮತ್ತು ಮಸೀದಿಗಳಿವೆ.

ಕೋಟೆಯ ವಿಹಂಗಮ ನೋಟ


ಈ ಭವ್ಯವಾದ ಕೋಟೆ ಕಟ್ಟಿದ್ದು ಯಾರು?
ಈ ಭದ್ರವಾದ ಕೋಟೆಯನ್ನು ಕೇವಲ ರಕ್ಷಣೆಗಾಗಿ ಮಾತ್ರ ನಿರ್ಮಿಸಲಾಗಿದೆ ಎನ್ನಲಾಗಿದೆ. ಸುಮಾರು 15ನೇ ಶತಮಾನದಲ್ಲಿ ವೆಂಕಟಪ್ಪ ನಾಯಕ ಎಂಬುವವರು ಈ ಕೋಟೆಯ ನಿರ್ಮಾಣವನ್ನು ಪ್ರಾರಂಭ ಮಾಡಿದರು. ಇವರು ಅಂದಿನ ಒಬ್ಬ ಸ್ಥಳೀಯ ಆಡಳಿತಗಾರರಾಗಿದ್ದರು. ತದನಂತರ ಶಿವಪ್ಪ ನಾಯಕನವರು ಈ ಕೋಟೆಯ ನಿರ್ಮಾಣವನ್ನು ಪೂರ್ಣಗೊಳಿಸಿದರು. ಕೆಲವು ವರ್ಷಗಳ ನಂತರ ಹೈದರಾಲಿ ವಶಕ್ಕೆ ಪಡೆದನು, ಕ್ರಮೇಣ ಟಿಪ್ಪು ಈ ಕೋಟೆಯನ್ನು ಮುಖ್ಯ ಸೇನಾ ಕೇಂದ್ರವನ್ನಾಗಿ ಮಾಡಿಕೊಂಡನು. 1799 ರಲ್ಲಿ ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಟಿಪ್ಪು ಮರಣದ ನಂತರ ಈಸ್ಟ್ ಇಂಡಿಯಾ ಕಂಪನಿ ಈ ಕೋಟೆಯನ್ನು ವಶಪಡಿಸಿಕೊಂಡಿತು.


ಬೇಕಲ್ ಕೋಟೆಗಿರುವ ಮಾರ್ಗಗಳು
ಈ ಕೋಟೆಯನ್ನ ತಲುಪುವುದು ಬಹಳ ಸುಲಭ. ಸ್ಥಳೀಯ ರಸ್ತೆಗಳು ಉತ್ತರದಲ್ಲಿ ಮಂಗಳೂರಿಗೆ ಮತ್ತು ದಕ್ಷಿಣದಲ್ಲಿ ಕ್ಯಾಲಿಕಟ್‌ಗೆ ಸಂಪರ್ಕ ಕಲ್ಪಿಸುತ್ತವೆ. ಈ ಕೋಟೆಗೆ ಹತ್ತಿರದ ರೈಲ್ವೆ ನಿಲ್ದಾಣವೆಂದರೆ ಅದು ಬೇಕಲ್‌ ಫೋರ್ಟ್‌ ರೈಲು ನಿಲ್ದಾಣ, ಮಂಗಳೂರು ಮತ್ತು ಪಾಲಕ್ಕಾಡ್‌ ಮಾರ್ಗದಲ್ಲಿರುವ ಕೋಟಿಕುಲಂ ರೈಲು ನಿಲ್ದಾಣವಾಗಿದೆ.
ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮಂಗಳೂರು, ಕಣ್ಣೂರು ಮತ್ತು ಕ್ಯಾಲಿಕಟ್‌ ಆಗಿವೆ. ಇಲ್ಲಿಂದ ಸುಲಭವಾಗಿ ಈ ಸುಂದರವಾದ ಕೋಟೆಗೆ ಭೇಟಿ ನೀಡಬಹುದು. ಇನ್ಯಾಕೆ ತಡ, ಕೋಟೆ ನೋಡಿಕೊಂಡು ಬರಲು ಟ್ರಿಪ್ ಪ್ಲಾನ್ ಮಾಡಿ.
-ರಮೇಶ್, 24x7 ಲೈವ್ ಕನ್ನಡ


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45