SPECIAL:
ಮಂಜುನಾಥ್ ಡಿ
ಅವರು ವೃತಿಯಲ್ಲಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದರು. ಉತ್ತಮವಾದ ಸಂಬಳವು ಕೂಡಾ ಅವರಿಗೆ ಬರುತಿತ್ತು. ಜೊತೆಗೆ ಅವರಿಗೆ ನಾಲ್ಕು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದರು. ಆದರೆ ಪತ್ನಿಯ ಸಾವಯವ ಕೃಷಿಯ ಆಸಕ್ತಿಗೆ ಮನಸೋತ ಪ್ರಾಚಾರ್ಯಾರರು ಈಗ, ಮಡದಿಯ ಆಸಕ್ತಿಗೆ ಮಣೆ ಹಾಕಿ ವೃತಿಗೆ ವಿದಾಯ ಹೇಳಿ, ಸಾವಯವ ಕೃಷಿಗೆ ಜೈ ಎಂದಿದ್ದಾರೆ. ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ 40 ಬಗೆಯ ದೇಶಿಯ ತರಕಾರಿ ಹಾಗೂ 15 ಬಗೆಯ ವಿವಿಧ ತರಕಾರಿಯನ್ನು ಬೆಳೆಯುವ ಮೂಲಕ ಸಾವಯವ ಕೃಷಿ ಸೈ ಎಣ್ಣಿಸಿಕೊಂಡಿದ್ದಾರೆ ದಂಪತಿ.
ಹುಬ್ನಳ್ಳಿಯ ಬಿ.ವಿ.ಬಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿ, ಗದುಗಿನ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿದ್ದ ಡಾ. ಪ್ರಕಾಶ ಅವರು, ಒಂದು ವರ್ಷದ ಹಿಂದೆ ಕೃಷಿಯತ್ತ ಒಲವು ತೋರಿದರು. ಅವರ ಪತ್ನಿ ಕುಸುಮಾ ಹುಬ್ಬಳ್ಳಿ ಸಾವಯವ ಕೃಷಿಯಲ್ಲಿ ಹೊಂದಿದ್ದ ಆಸಕ್ತಿಯಿಂದ ಪ್ರಭಾವಿತರಾಗಿ, ಈಗ ಸಾಯವಯ ಕೃಷಿಯಲ್ಲಿ ಈ ದಂಪತಿಗಳು, ಕಲಘಟಗಿ ತಾಲ್ಲೂಕಿನ ಹಿಂಡಸಗೇರಿ ಗ್ರಾಮದ ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಭೂಮಿಯಲ್ಲಿ ತರಕಾರಿ ಬೆಳೆಯುವ ಮೂಲಕ ಬೇಸಾಯ ಆರಂಭಿಸಿದರು. ತಾವು ಬೆಳೆದ ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಹುಬ್ಬಳ್ಳಿ ನಗರದ ನಿವಾಸಿಗಳಿಂದ ಆನ್ಲೈನ್ ಮೂಲಕ ಆರ್ಡರ್ ತಗೆದುಕೊಂಡು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. 40 ಬಗೆಯ ದೇಶಿ ಮತ್ತು 15 ಬಗೆಯ ವಿದೇಶಿ ತರಕಾರಿಗಳನ್ನು ಈ ದಂತಿಗಳು ಬೆಳೆಯುತ್ತಿದ್ದು. ನಾಟಿ ಮಾಡುವುದರಿಂದ ಹಿಡಿದು ಕಟಾವು ಮಾಡುವ ತನಕ ಬೆಳೆಯ ಸಂರಕ್ಷಣೆಯನ್ನು ಸಾವಯವ ವಿಧಾನದ ಮೂಲಕವೇ ನಿರ್ವಹಣೆ ಮಾಡುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಬೆಳೆಗಳ ಸುರಕ್ಷತೆಗೆ ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಬೇವಿನ ಎಣ್ಣೆ, ಅಗ್ನಿ ಅಸ್ತ್ರ, ಹುಳಿ ಮಜ್ಜಿಗೆ, ಕೀಟಗಳ ನಿರ್ವಹಣೆಗೆ ಸ್ಟಿಕಿ ಟ್ರ್ಯಾಪ್, ಲೈಟ್ ಟ್ರಾಪ್ಗಳನ್ನು ಬಳಸುತ್ತಿದ್ದಾರೆ. ಚೆಂಡು ಹೂವು ಬೆಳೆದು ಗ್ರಾಹಕರ ಮನೆ ಬಾಗಿಲಿಗೆ ‘ನೇಚರ್ ಫಸ್ಟ್ ಫಾರ್ಮ್’ ಮೂಲಕ ಸರಬರಾಜು ಮಾಡುತ್ತಿದ್ದಾರೆ.
ಸಾವಯವ ಕೃಷಿಯ ವಿಧಾನಗಳ ಕುರಿತು ಮಾತನಾಡಿದ ಡಾ. ಪ್ರಕಾಶ ಹಾಗೂ ಕುಸುಮಾರವರು ಸಾವಯವ ಕೃಷಿಯಲ್ಲಿ ನಾವು ನೈಸರ್ಗಿಕವಾಗಿ ತರಕಾರಿಗಳನ್ನು ಬೆಳೆಯುತ್ತಿವೆ, ತರಕಾರಿ ಬೆಳವಣಿಗೆ ಸಂದರ್ಭದಲ್ಲಿ ಬೇಕಾದ ರಕ್ಷಣೆಗೆ ಔಷಧಿಗಳನ್ನು ನೈಸರ್ಗಿಕವಾಗಿರುವುದನ್ನು ಬಳಸಿಕೊಂಡು ತಯಾರಿಸುತ್ತೆ. ತೋಟಗಾರಿಕೆ ಇಳಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಸಾವಯವ ಕೃಷಿ ಮಾಡಲು ನಮ್ಮಗೆ ಮತ್ತಷ್ಟು ಅನುಕೂಲವಾಗಿದೆ, ಬರುವ ದಿನಗಳಲ್ಲಿ ಇದನ್ನು ಹೀಗೆ ಮುಂದುವರೆಸಿಕೊಂಡು ಗ್ರಾಹಕರಿಗೆ ಉತ್ತಮವಾದ ತರಕಾರಿಗಳನ್ನು ನಾವು ನೀಡುತ್ತೇವೆ ಜೊತೆಗೆ ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ರೈತರು ಬಂದು ನೋಡಿ, ವಿಧಾನಗಳ ಕುರಿತು ತಿಳಿಯಬಹುದಾಗಿದೆ ಜೊತೆಗೆ ಅಗತ್ಯ ಮಾರ್ಹದರ್ಶನವನ್ನು ನಾವು ಕೂಡಾ ನೀಡುತ್ತೇವೆ ಎನ್ನುತ್ತಾರೆ.
ಅಲ್ಲದೆ ಗ್ರಾಹಕರೂ ಆರ್ಡರ್ ಮಾಡುವ ತರಕಾರಿ ಪ್ಯಾಕಿಂಗ್ ಕುರಿತು ಸಾಕಷ್ಟು ಗಮನಹರಿಸಲಾಗಿದ್ದು, ಪ್ರೀಜ್ ಇಲ್ಲದೆನೂ ತರಕಾರಿಯು ಹಾಳಾಗದೆ ಹಾಗೇ ಮನೆಯಲ್ಲಿ ಕೆಲವು ದಿನಗಳ ಕಾಲ ಇಟ್ಟು ಬಳಸಬಹುದಾಗಿದೆ. ಅಲ್ಲದೆ ತೋಟಗಾರಿಕೆ ಇಲಾಖೆಯ ಸಹಕಾರ ಪಡೆದಿಕೊಂಡಿರುವ ದಂಪತಿಗಳ್ಳಿಬ್ಬರು, ಬೆಳೆಯುತ್ತಿರುವ ಸಾವಯವ ಕೃಷಿ ತರಕಾರಿಗೆ ನಗರಗಳಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಮತ್ತಷ್ಟೂ ತರಕಾರಿ ಬೆಳವಣಿಗೆಯನ್ನು ಹೆಚ್ಚಿಸುವ ಇಂಗಿತವನ್ನು ಈ ದಂಪತಿ ವ್ಯಕ್ತಪಡಿಸಿದ್ದಾರೆ.