ಈ ಕ್ಷಣ :

ಪಿಂಕ್ ಸಿಟಿ ಜೈಪುರ: ಇಲ್ಲಿನ ಪ್ರತಿ ಕಟ್ಟಡಕ್ಕೂ ಇದೆ ಒಂದೊಂದು ಇತಿಹಾಸ!

Published 16 ಮಾರ್ಚ್ 2023, 14:27 IST
Last Updated 5 ಮೇ 2023, 00:55 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

SPECIAL:

ಭಾರತದ ಪಿಂಕ್ ಸಿಟಿ ಜೈಪುರದ ಬಗ್ಗೆ ಕೇಳಿದ್ದೀರಾ?: ಅಲ್ಲಿನ ಪ್ರತಿ ಕಟ್ಟಡಕ್ಕೂ ಇದೆ ಒಂದು ಕಥೆ. ರಾಜಸ್ಥಾನದ ರಾಜಧಾನಿ ಜೈಪುರ “ಪಿಂಕ್ ಸಿಟಿ” ಎಂದೇ ಖ್ಯಾತಿ ಪಡೆದಿದೆ. ಇಲ್ಲಿನ ಕಲೆ, ಇತಿಹಾಸ, ಕಟ್ಟಡಗಳ ವಿನ್ಯಾಸ, ಕೋಟೆಗಳು, ವಾಸ್ತು, ಅರಮನೆಗಳು ಎಲ್ಲವೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಜೈಪುರದ ಇಡೀ ಪಟ್ಟಣ ಪಿಂಕ್ ಬಣ್ಣದಲ್ಲಿ ಮಿಂದೆದ್ದಿದೆ. ಇಷ್ಟೇ ಅಲ್ಲ, ಈ ಸ್ಥಳವನ್ನು “ಫೋಟೋಗ್ರಾಫರ್ ಸ್ವರ್ಗ ” ಎಂದು ಕರೆಯಲಾಗುತ್ತದೆ.

ಸಿಟಿ ಮಹಲ್

ಇಲ್ಲಿನ ಪ್ರತಿ ಕಟ್ಟಡಕ್ಕೂ ಪಿಂಕ್ ಬಣ್ಣ ಹಚ್ಚಲು ಮುಖ್ಯ ಕಾರಣವಿದೆ. ಅದೇನೆಂದರೆ, ನಗರದ ಸವಾಯಿ ರಾಮ್ ಸಿಂಗ್ ಎಂಬ ರಾಜನ ಪ್ರಭಾವ. 1876 ​​ರಲ್ಲಿ, ರಾಣಿ ವಿಕ್ಟೋರಿಯಾ ಅವರ ಮಗ, ಆಲ್ಬರ್ಟ್ ಎಡ್ವರ್ಡ್, ಪ್ರಿನ್ಸ್ ಆಫ್ ವೇಲ್ಸ್ ಭಾರತಕ್ಕೆ ಭೇಟಿ ನೀಡಿದರು. ಆ ಸಮಯದಲ್ಲಿ ಪಿಂಕ್ ಆತಿಥ್ಯದ ಬಣ್ಣವೆಂದು ಪರಿಗಣಿಸಿದ್ದರಿಂದ, ಮಹಾರಾಜ ರಾಮ್ ಸಿಂಗ್ ಅವರು ಇಡೀ ನಗರವನ್ನು ಪಿಂಕ್ ಬಣ್ಣದಿಂದ ಚಿತ್ರಿಸಿದರು. ಇದು ತಮ್ಮ ರಾಯಲ್ ಗೆಸ್ಟ್ ವೆಲ್ಕಮ್ ಮಾಡುವ ಉದ್ದೇಶದಿಂದ ಮಾಡಲಾಗಿತ್ತು. ಲಾರ್ಡ್ ಆಲ್ಬರ್ಟ್ ಜೈಪುರವನ್ನು ‘ಗುಲಾಬಿ ನಗರ’ ಎಂದು ಬಣ್ಣಿಸಿದ್ದಾರೆ ಎಂದು ಹೇಳಲಾಗುತ್ತದೆ, ಆದ್ದರಿಂದ ಜೈಪುರಕ್ಕೆ ಪಿಂಕ್ ಸಿಟಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಮಹಾರಾಜ ಸವಾಯಿ ರಾಮ್ ಸಿಂಗ್ ಅವರು ದೇಶದ ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.1877 ರಲ್ಲಿ ಹೊಸ ಕಾನೂನು ಅಂಗೀಕರಿಸಲಾಯಿತು. ಅದರ ಪ್ರಕಾರ ಮುಂದಿನ ಎಲ್ಲ ಕಟ್ಟಡಗಳಿಗೂ ಪಿಂಕ್ ಬಣ್ಣವನ್ನೇ ಬಳಿಯುವಂತೆ ನಿರ್ಧರಿಸಲಾಯಿತು. ಏಕೆಂದರೆ ಪುರಾಣದ ಪ್ರಕಾರ ಜೈಪುರದ ರಾಣಿಯು ಪಿಂಕ್ ಬಣ್ಣವನ್ನು ತುಂಬಾ ಇಷ್ಟಪಡುತ್ತಿದ್ದಳು.

ಹವಾ ಮಹಲ್

ನಹಾರ್ ಘರ್ ಫೋರ್ಟ್: 1734ರಲ್ಲಿ ಕಟ್ಟಲಾದ ಈ ಕೋಟೆ ಸೂರ್ಯಾಸ್ತದ ಸುಂದರ ದೃಶ್ಯ ನೋಡಲು ಫೇಮಸ್ ಆಗಿದೆ. ಈ ಫೋರ್ಟ್ ಒಳ ಹೋಗಲು ಸುಮಾರು ಎರಡು ಕಿಮೀ ನಡೆಯಬೇಕು.
ಸಿಟಿ ಪ್ಯಾಲೇಸ್: ಈ ಅರಮನೆ ರಾಜಸ್ಥಾನಿ ಹಾಗೂ ಬಾಬರ್ ವಾಸ್ತು ಶಿಲ್ಪ ಹೊಂದಿದೆ. ಇದಕ್ಕೆ ಎರಡು ಎಂಟ್ರೆನ್ಸ್ ಇದ್ದು, ಒಂದು ವೀರೇಂದ್ರ ಪೋಲ್ ಹಾಗೂ ಇನ್ನೊಂದು ಉದಯ್ ಪೋಲ್ ಆಗಿದೆ.
ಹವಾ ಮಹಲ್: ಇದು ಜೈಪುರದ ಅತ್ಯಂತ ಅಚ್ಚರಿಯ ಕಟ್ಟಡವಾಗಿದೆ. 5 ಮಹಡಿಗಳು ಹಾಗೂ 953 ಸಣ್ಣ ಕಿಟಕಿಗಳನ್ನು ಹೊಂದಿದೆ.
ಜಲ್ ಮಹಲ್: ಹೆಸರೇ ಹೇಳುವಂತೆ ಇದು ನೀರಿನ ನಡುವೆ ಇರುವ ಅರಮನೆ ಆಗಿದೆ. ಇದು ಕಾಣಲು ಸಣ್ಣದಂತೆ ಅನಿಸಿದರೂ, ದೊಡ್ಡದಾಗಿದೆ. ನಾಲ್ಕು ಮಹಡಿಗಳು ನೀರಿನಡಿ ಸ್ಥಿತವಾಗಿವೆ.
ಜಂತರ್ ಮಂತರ್: ಮಹಾರಾಜ ಸವಾಯಿ ಸಿಂಗ್ ಅವರ ದೊಡ್ಡ ಇಂಟರೆಸ್ಟಿಂಗ್ ವಿಷಯ ಖಗೋಳಶಾಸ್ತ್ರವಾಗಿತ್ತು. ಆದ್ದರಿಂದ ಅವರು ಋತುಗಳು, ನಕ್ಷತ್ರಗಳು ಮತ್ತು ಸೌರ ಮತ್ತು ಚಂದ್ರ ಗ್ರಹಣಗಳನ್ನು ಲೆಕ್ಕಹಾಕಲು ಐದು ವೀಕ್ಷಣಾಲಯಗಳನ್ನು ನಿರ್ಮಿಸಿದರು. ಇಷ್ಟೇ ಅಲ್ಲದೆ, ಅಲ್ಲಿನ ದಾಸವಾಳದ ಟೀ, ಲಸ್ಸಿ, ದಾಲ್ ಬಲೂಚಿ, ಚಿಕನ್ ಲಾಲಿಪಪ್, ಪಾಲಕ್ ಪನೀರ್, ಪ್ಯಾಜ್ ಕಚೋರಿ ಹಾಗೂ ಪಾಸ್ತಾ ತಮ್ಮ ವಿಶೇಷ ರುಚಿಯಿಂದ ಪ್ರಖ್ಯಾತಿ ಪಡೆದಿವೆ.

ಇದು ಪಿಂಕ್ ಸಿಟಿ ಜೈಪುರದ ಸಿಂಪಲ್ ಸ್ಟೋರಿ. ಒಮ್ಮೆ ಇಲ್ಲಿಗೆ ಪ್ರವಾಸಕ್ಕೆ ಹೋಗಿ ನೋಡಿಕೊಂಡು ಬನ್ನಿ.

-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, 24x7 ಲೈವ್ ಕನ್ನಡ


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45