ENTERTAINMENT:
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಬ್ಲಾಕ್ಬಾಸ್ಟರ್ ಚಿತ್ರಗಳನ್ನು ನೀಡಿ ಉತ್ತಮ ನಟ ಎನಿಸಿಕೊಂಡಿರುವುದು ಮಾತ್ರವಲ್ಲ ಅವರು ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ಮುಡಿಪಾಗಿಟ್ಟಿದ್ದಾರೆ. ಈಗಾಗಲೇ ಅವರು ಹಲವಾರು ಜನರ ಕಷ್ಟಗಳಿಗೆ ಸ್ಪಂದಿಸಿ ಸಹಾಯ ಹಸ್ತ ನೀಡಿದ್ದಾರೆ. ಇದೀಗ ಅವರು ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡುವುದರ ಮೂಲಕ ಸುದ್ದಿಯಾಗಿದ್ದಾರೆ.
ಈ ವರ್ಷದ ಜೂನ್ 17ರಂದು ನಟ ಅಕ್ಷಯ್ ಕುಮಾರ್ ಅವರು ಕಾಶ್ಮೀರದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ ಎಫ್) ಗೆ ಭೇಟಿ ನೀಡಿ ಅಲ್ಲಿನ ಶಾಲೆಯೊಂದರ ವ್ಯವಸ್ಥೆಯನ್ನು ಗುರುತಿಸಿದ್ದರು. ಇದೀಗ ಅವರು ಆ ಶಾಲೆಯನ್ನು ಪುನರ್ನಿಮಿಸಲು 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಕಾಶ್ಮೀರದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಗೆ ಭೇಟಿ ನೀಡಿದ ಅನುಭವವನ್ನು ಹಂಚಿಕೊಂಡ ನಟ, “ನಿಜವಾದ ವೀರರನ್ನು ಭೇಟಿ ಮಾಡಿದಾಗ ನನ್ನ ಹೃದಯವು ಗೌರವದಿಂದ ತುಂಬಿದೆ. ಇದೀಗ ಅದಕ್ಕೆ ಅಡಿಪಾಯ ಹಾಕಲಾಗಿದೆ” ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಈ ಶಾಲೆಗೆ ಅಕ್ಷಯ್ ಕುಮಾರ್ ಅವರ ತಂದೆ ದಿವಂಗತ ಹರಿ ಓಂ ಭಾಟಿಯಾ ಅವರ ಹೆಸರನ್ನು ಇಡಲಾಗಿದೆ.