ENTERTAINMENT:
ಸಿನಿಮಾ ನಟರು ಬರೀ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹೀರೋ ಆಗಲು ಹೊರಟಿದ್ದಾರೆ. ಈಗಾಗಲೇ ನಟ ಸೋನು ಸೂದ್ , ಅಕ್ಷಯ್ ಕುಮಾರ್ ಮುಂತಾದ ನಟರು ಸಿನಿಮಾದಲ್ಲಿ ಮಾತ್ರವಲ್ಲ ಸಮಾಜ ಸೇವೆಯಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದೇ ಸಾಲಿಗೆ ಇದೀಗ ಸುನೀಲ್ ಶೆಟ್ಟಿ ಅವರು ಸೇರ್ಪಡೆಯಾಗಿದ್ದಾರೆ.
ಕಳೆದ ತಿಂಗಳು ಮಹಾರಾಷ್ಟ್ರದ ಕೊಂಕಣದಲ್ಲಿ ಉಂಟಾದ ಭಾರಿ ಮಳೆಗೆ ಅನೇಕ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ. ರತ್ನಗಿರಿ ಮತ್ತು ರಾಯ್ ಗಡ್ ಜಿಲ್ಲೆಗಳಲ್ಲಿನ ಖೇಡ್, ಚಿಪ್ಲುನ್ ಮತ್ತು ಮಹಾದ್ ನ ಲೇನ್ ಗಳ ಮೂಲಕ ನೀರು ಹರಿಯುತ್ತಿದ್ದಂತೆ ಸ್ಥಳಿಯರು ತಮ್ಮ ಮನೆಗಳು ನೀರಿನಲ್ಲಿ ಮುಳಗಿದ್ದರಿಂದ ಹಾಗೂ ಭೂಕುಸಿತದಿಂದ ಕೊಚ್ಚಿಕೊಂಡು ಹೋಗಿದ್ದಾರೆ.
ಈ ಭಾರೀ ನಷ್ಟವನ್ನು ಕಂಡ ಸುನೀಲ್ ಶೆಟ್ಟಿ ಅವರು ಪ್ರಕೃತಿ ವಿಕೋಪಕ್ಕೆ ಬಲಿಯಾದವರನ್ನು ಬೆಂಬಲಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಜನರಲ್ಲಿ ಮನವಿ ಮಾಡಿದ್ದಾರೆ. ತಾನು ಪರಿಹಾರ ಕಾರ್ಯಗಳನ್ನು ಮಾಡುವ ಸಾಮಾಜಿಕ ಸಂಘಟನೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಅವರು ನಮ್ಮ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಜನರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ. ಇದರಲ್ಲಿ ಸಂಗ್ರಹಿಸಿದ ಹಣವನ್ನು ನೆರೆಸಂತ್ರಸ್ತರಿಗೆ, ದಿನಸಿ, ಬಟ್ಟೆ, ಆಹಾರ ಪದಾರ್ಥಗಳನ್ನು ಖರೀದಿಸಲು ನೀಡಲಾಗುತ್ತದೆ. ಇದಕ್ಕೆ ಎಲ್ಲರೂ ಕೈಜೋಡಿಸಿ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ