DISTRICT:
ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆ ವತಿಯಿಂದ ಕನ್ನಡ ಜಾತ್ರೆ 2022 ಕಾರ್ಯಕ್ರಮ ಬೆಂಗಳೂರಿನಲ್ಲಿ ಶನಿವಾರ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಲೇಖಕ ಎಸ್. ಷಡಕ್ಷರಿ ಅವರು, ಸಚಿನ್ ತೆಂಡೂಲ್ಕರ್, ತೇನ್ ಸಿಂಗ್ ಅವರಂತೆ ಎಲ್ಲರಿಗೂ ಒಂದು ಕನಸು ಇರುತ್ತದೆ. ಅದನ್ನು ನನಸು ಮಾಡುವುದೇ ಸಾಧನೆ ಎಂದರು.
ಮಕ್ಕಳಿಗೆ ಪೋಷಕರು ನೀಡುವ ಅತ್ಯುತ್ತಮ ಕೊಡುಗೆಯೇ ಗುರಿ. ಗುರಿ ಮುಟ್ಟುವ ಛಲವನ್ನು ಮಕ್ಕಳು ರೂಢಿಸಿಕೊಂಡರೆ ಸಾಧನೆ ಸಾಧ್ಯ. ನಾವು ಕನ್ನಡಿಗರು ಕೇವಲ ನವೆಂಬರ್ ಕನ್ನಡಿಗರಾಗ ಬಾರದು. ಕನ್ನಡ ಪ್ರೀತಿ ನಿತ್ಯವೂ ಇರಬೇಕು. ಅದನ್ನು ಮೈಗೂಡಿಸಿಕೊಂಡು ಕನ್ನಡತನ ಮೆರೆಯಬೇಕು ಎಂದು ಹೇಳಿದರು.
ಮತ್ತೊಬ್ಬ ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ರಾಜಶೇಖರಯ್ಯ ಅವರು, ಸಂಸ್ಥೆಯ ಕನ್ನಡ ಮತ್ತು ಸಂಸ್ಕೃತಿ ತಂಡದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಮತ್ತು ಆಚರಣೆ ಸ್ಮರಿಸಿದರು. ಧರ್ಮ,ಜಾತಿವೆಲ್ಲವನ್ನು ಮರೆತು ನಾಡು ಮತ್ತು ಹೊರ ರಾಜ್ಯಗಳಲ್ಲೂ ವಿಜೃಂಭಣೆಯಿಂದ, ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ.ಕನ್ನಡ ಭಾಷೆಯ ಉಳುವಿಗೆ ನಾವು ಕಂಕಣಬದ್ಧರಾಗಬೇಕು ಎಂದು ಹೇಳಿದರು.
*ಸನ್ಮಾನ*
ಇದೇ ವೇಳೆ ಹಿರಿಯ ಸಮಾಜ ಸೇವಕಿ , ಲೇಖಕಿ ಲಲಿತಾ ಶೇಷಾದ್ರಿ, ಹಿರಿಯ ಚಿತ್ರನಟ ಎಂ.ಎಸ್. ಉಮೇಶ್, ಹಿರಿಯ ತಬಲವಾದಕ ಆರ್.ಗಂಗಾಧರ್, ಮಾಸ್ಟರ್ ಗೋಕುಲ್ ಸಹೃದಯ್ ರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಕನ್ನಡ ಮತ್ತು ಸಂಸ್ಕೃತಿ ತಂಡದ ಜಿಲ್ಲಾ ಸಂಚಾಲಕ ಎನ್.ಆರ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಉಪ ಜಿಲ್ಲಾ ರಾಜ್ಯಪಾಲರಾದ ಬಿ.ಎಸ್.ನಾಗರಾಜ, .ಎಂ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಜಿಲ್ಲಾ ತಂಡದ ಜಿಲ್ಲಾಧ್ಯಕ್ಷರಾದ
ರಾಧಕೃಷ್ಣ ಹೆಗಡೆ, ಸಿ.ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು