ಈ ಕ್ಷಣ :

ಕೊರೊನಾ ಹೊಡೆತದ ಬೆನ್ನಲ್ಲೇ ದಾಳಿಂಬೆ ಬೆಳೆಗಾರರಿಗೆ ಅಂಗಮಾರಿ, ದುಂಡಾಣು ರೋಗದ ಕಾಟ..!

Published 15 ಮಾರ್ಚ್ 2023, 23:38 IST
Last Updated 6 ಮೇ 2023, 20:01 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

DISTRICT:

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಗಾರರಿಗೆ ಕೊರೊನಾ, ಪ್ರವಾಹದ ಹೊಡೆತದಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಆದರೀಗ ದಾಳಿಂಬೆ ಬೆಳೆಗೆ ಹವಾಮಾನ ವೈಪರಿತ್ಯದಿಂದಾಗಿ ದಾಳಿಂಬೆ ಕಣಜದಲ್ಲಿ ಅಂಗಮಾರಿ ದುಂಡಾಣು ರೋಗದಿಂದ ದಾಳಿಂಬೆ ಬೆಳೆಗಾರರು ಕಂಗಾಲಾಗಿದ್ದಾರೆ.

ಕಲಾದಗಿ ಎಂದಾಕ್ಷಣವೇ ತಕ್ಷಣಕ್ಕೆ ನೆನಪಿಗೆ ಬರುವುದು ಹೆಜ್ಜೆ ಹೆಜ್ಜೆಗೂ ಕಾಣಿಸುವ ತೋಟಗಾರಿಕೆ ಬೆಳೆಗಳು. ಬಗೆ ಬಗೆಯ ಹಣ್ಣುಗಳು. ಅದರಲ್ಲೂ ಹೆಚ್ಚಿನ ರೈತರು ಬೆಳೆಯುವ ದಾಳಿಂಬೆ ತೋಟಗಳು. ಹಾಗಾಗಿಯೇ ಕಲಾದಗಿ ದಾಳಿಂಬೆ ಕಣಜವೆಂದು ಪ್ರಸಿದ್ಧಿ ಪಡೆದಿದೆ. ಕಲಾದಗಿ ಭಾಗದಲ್ಲಿ ಅರ್ಧ ಶತಮಾನಕ್ಕೂ ಮೊದಲೇ ರೈತರು ದಾಳಿಂಬೆ ಬೆಳೆಯುತ್ತಿದ್ದರು. ರಾಜ್ಯದ ಉಳಿದ ಕಡೆಗೆ ದಾಳಿಂಬೆ ಬೆಳೆಗೆ ಅಂಗಮಾರಿ ದುಂಡಾಣು ರೋಗ ದೊಡ್ಡಮಟ್ಟದಲ್ಲಿ ನಷ್ಟ ಮಾಡಿದ್ದರೂ ಕಲಾದಗಿ ಹೋಬಳಿಯ ದಾಳಿಂಬೆ ಬೆಳೆಗಾರರು ಮಾತ್ರ ಗಿಡಗಳನ್ನು ಸೇಫ್ ಮಾಡಿಕೊಂಡಿದ್ದರು. ಆದರೀಗ ಎರಡ್ಮೂರು ವರ್ಷಗಳಿಂದ ಇಲ್ಲಿಯೂ ಸಹ ಅಂಗಮಾರಿ ದುಂಡಾಣಿ ರೋಗ ದಾಳಿಂಬೆ ಬೆಳೆಯನ್ನು ಸಂಪೂರ್ಣ ಹಾಳು ಮಾಡುತ್ತಿದೆ. ಕಲಾದಗಿ, ಅಂಕಲಗಿ, ಗೋವಿಂದಕೊಪ್ಪ, ಹಿರೇಸಂಶಿ, ಚಿಕ್ಕಸಂಶಿ, ಕಾತರಗಿ ಸೇರಿದಂತೆ ಆ ಭಾಗದಲ್ಲಿ ಅಂಗಮಾರಿ ದೊಡ್ಡಮಟ್ಟದಲ್ಲಿ ದಾಳಿ ನಡೆಸಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಬೆಳೆಗಾಗಿ ಖರ್ಚು ಮಾಡಿದ್ದ ಲಕ್ಷ ಲಕ್ಷ ಹಣ ವಾಪಸ್ಸು ಬಾರದೇ ಸಾಲದ ಸುಳಿಗೆ ಸಿಲುಕುವಂತಾಗಿದೆ. ಇದು ದಾಳಿಂಬೆ ಬೆಳೆಗಾರರ ಜಂಘಾಬಲವನ್ನೆ ಕುಸಿಯುವಂತೆ ಮಾಡಿದೆ. ಅನೇಕ ಜಮೀನುಗಳಲ್ಲಿ ಶೇ. 90 ರಷ್ಟು ಹಣ್ಣು ಸಂಪೂರ್ಣ ಹಾಳಾಗಿದೆ. ಇದರಿಂದ ಅನೇಕರ ಗಿಡಗಳನ್ನು ಕಿತ್ತುಹಾಕಿದ್ದಾರೆ. ರೋಗಕ್ಕೆ ಸಿಲುಕಿದ ಹಣ್ಣು ಕಟ್ ಮಾಡಿ ಗ್ರಾಮದ ಹೊರವಲಯದಲ್ಲಿ ರಾಶಿ ರಾಶಿ ಗುಡ್ಡೆ ಹಾಕಿ ಸುಡುತ್ತಿದ್ದಾರೆ.

ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ 3 ಸಾವಿರ ಹೆಕ್ಟರ್ ಪ್ರದೇಶದಲ್ಲಿ ರೈತರು ದಾಳಿಂಬೆ ಬೆಳೆದಿದ್ದಾರೆ. ಪ್ರತಿ ಎಕರೆ ದಾಳಿಂಬೆ ಬೆಳೆಯಲು 3 ರಿಂದ 5 ಲಕ್ಷ ರೂ. ಗಳ ವರೆಗೂ ಖರ್ಚು ಮಾಡುತ್ತಾರೆ. ಎರಡು ವರ್ಷ ಬರೀ ದುಡ್ಡು ಹಾಕೋದೆ. ಆ ನಂತರದಲ್ಲಿ ದುಡ್ಡಿನ ಮುಖ ನೋಡಬೇಕು. ಇದೀಗ ಹೊಸದಾಗಿ ದಾಳಿಂಬೆ ಗಿಡ ಹಚ್ಚಿದ ಅನೇಕ ರೈತರು ಬ್ಯಾಂಕ್ ಗಳಲ್ಲಿ ಲಕ್ಷ ಲಕ್ಷ ಸಾಲ ಮಾಡಿದ್ದೆ ಬಂತು. ಇದೀಗ ಆದಾಯ ಶುರುವಾಗುತ್ತೆ ಅನ್ನುವಷ್ಟರಲ್ಲಿ ಅಂಗಮಾರಿ ದಾಳಿಂಬೆ ಬೆಳೆಗಾರರ ಕನಸುಗಳನ್ನು ನುಚ್ಚುನೂರು ಮಾಡಿ, ಅವರ ಬದುಕಿನಲ್ಲಿ ಚಲ್ಲಾಟವಾಡುತ್ತಿದೆ. ಕಲಾದಗಿ ಭಾಗದಲ್ಲಿ ಬಹುತೇಕವಾಗಿ ದಾಳಿಂಬೆ ಬೆಳೆಯುವ ರೈತರಿಗೆ ಇದೀಗ ಎರಡ್ಮೂರು ವರ್ಷದಿಂದ ಬರೀ ಲಾಸ್ ಎನ್ನುವಂತಾಗಿದೆ.

ಕೊರೊನಾಗಿಂತಲೂ ವೇಗವಾಗಿ ಹರಡುವ ಅಂಗಮಾರಿ ದುಂಡಾಣು ರೋಗದಿಂದ ದಾಳಿಂಬೆ ಗಿಡ ಮತ್ತು ಹಣ್ಣು ಉಳಿಸಿಕೊಳ್ಳಲಾಗದೇ ರೈತರು ದಿಕ್ಕುತೋಚದಾಗಿದ್ದಾರೆ. ಇದೀಗ ಸರ್ಕಾರ ನೆರವಿಗೆ ಬಾರದೇ ಇದ್ದರೆ ರೈತರ ಪರಿಸ್ಥಿತಿ ಅಧೋಗತಿಗೆ ಹೋಗಲಿದೆ. ಸರ್ಕಾರ ದಾಳಿಂಬೆ ಬೆಳೆಗಾರರು ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು. ಮತ್ತೆ ದಾಳಿಂಬೆ ಬೆಳೆಯಲು ಪ್ರೋತ್ಸಾಹ ನೀಡಬೇಕು. ಇಲ್ಲವಾದಲ್ಲಿ ಈ ದುಭಾರಿ ಕಾಲದಲ್ಲಿ ರೈತರು ಮತ್ತು ದಾಳಿಂಬೆ ಬೆಳೆಯಲು ಆಗಲ್ಲ. ಅನೇಕ ರೈತರ ಜೀವನವೇ ಮುಳುಗಿಹೋಗುತ್ತಿದೆ. ಪ್ರತಿಯೊಬ್ಬ ದಾಳಿಂಬೆ ಬೆಳೆಗಾರರ ಕನಿಷ್ಠ ಐದಾರು ಲಕ್ಷ ರೂ. ಹಾನಿ ಅನುಭವಿಸುವಂತಾಗಿದೆ ಎಂದು ಚಿಕ್ಕ ಸಂಶಿ ಗ್ರಾಮದ ದಾಳಿಂಬೆ ಬೆಳೆಗಾರ ಕೃಷ್ಣಾ ಸಾಲಾಪೂರ ಹೇಳುತ್ತಿದ್ದಾರೆ.

ಹಣ್ಣಿನ ಕಣಜ ಖ್ಯಾತಿಯ ಕಲಾದಗಿ ಹೋಬಳಿಯ ದಾಳಿಂಬೆ ಬೆಳೆಗಾರರು ತೀವ್ರ ಆತಂಕದಲ್ಲಿ ಇದ್ದಾರೆ. ಬೆಳೆದು ನಿಂತಿದ್ದು, ಇನ್ನೇನು ಆದಾಯ ಬರುತ್ತೆ ಎನ್ನುವಷ್ಟರಲ್ಲಿ ಅಂಗಮಾರಿ ದುಂಡಾಣು ರೋಗ ಬೆಳೆಯನ್ನು ನುಂಗಿ ಹಾಕಿದೆ. ದಿಕ್ಕು ತೋಚದೇ ಕಂಗಾಲಾಗಿರುವ ದಾಳಿಂಬೆ ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಬರಬೇಕಿದೆ.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45